ಪಾಣಾಜೆ :ಕೊಂದಲ್ಕಡ್ಕ ಪಾರ್ಪಳ ಬೆಳ್ಳಿಂಬಳ ಕಲ್ಲಪದವು ಸಂಪರ್ಕ ರಸ್ತೆ ಯ ಪಾರ್ಪಳ ಎಂಬಲ್ಲಿ ಸೇತುವೆ ಯ ಎರಡು ಬದಿ ಯ ತಡೆಗೋಡೆ ಕುಸಿದು ನೇತಾಡುತ್ತಿದೆ. ಸೇತುವೆ ಯ ಪಿಲ್ಲರ್ ತಳಭಾಗ ಕುಸಿದು ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಬಗ್ಗೆ ಸದಸ್ಯರು ಚರ್ಚೆ ನಡೆಯಿತು.
ಶಾಸಕರ ಅನುದಾನದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡುವಂತೆ ಶಾಸಕ ಅಶೋಕ್ ರೈ ಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಪಾಣಾಜೆ ಗ್ರಾಮ ಸಾಮಾನ್ಯ ಸಭೆ ಯು ಪಂಚಾಯತ್ ಅಧ್ಯಕ್ಷೆ ಮೈಮುನತುಲ್ ಮೆಹ್ರ ಇವರ ಅಧ್ಯಕ್ಷತೆ ಯಲ್ಲಿ ಗುರು ವಾರ ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು.
ಪಂಚಾಯತ್ ಕಟ್ಟಡ ಸೋರಿಕೆ, ಹೊಸ ಕಟ್ಟಡಕ್ಕೆ ಸದಸ್ಯರಿಂದ ಆಗ್ರಹ ಪಾಣಾಜೆ ಪಂಚಾಯತ್ ಕಟ್ಟಡ ಸೋರುತ್ತಿದೆ, ನೀರು ಸೋರಿಕೆ ಯಿಂದ ಗೋಡೆಯಲ್ಲಿ ನೀರಿನ ಅಂಶ ದಿಂದ ವಿದ್ಯುತ್ ಗೋಡೆಯಲ್ಲಿ ಹರಿಯುತ್ತಿದೆ.ಶಾಕ್ ಹೊಡೆಯುತ್ತಿದೆ. ಇದರಿಂದ ಪಂಚಾಯತ್ ಗೆ ಬರುವ ಗ್ರಾಮಸ್ಥರಿಗೆ, ಸಿಬ್ಬಂದಿಗಳು ಹಾಗೂ ಜನಪ್ರತಿನಿಧಿಗಳಿಗೆ ತೊಂದರೆ ಯಾಗುತ್ತಿರುವ ಬಗ್ಗೆ ಚರ್ಚೆ ನಡೆದು ಹೊಸ ಕಟ್ಟಡದ ಬೇಡಿಕೆ ಗೆ ಶಾಸಕ ರಿಗೆ ಮನವಿ ಮಾಡಲು ಸಭೆ ನಿರ್ಧಾರ ತೆಗೆದುಕೊಂಡಿತ್ತು.
ದೇವಸ್ಯ ಅಂಗನವಾಡಿ ಕೇಂದ್ರದಲ್ಲಿ ಇಲಿ ಗಳ ಕಾಟ ಹೆಚ್ಚಿದೆ. ಆಹಾರ ವಸ್ತು ದಾಸ್ತಾನು ಗಳಿಗೆ ಸಮಸ್ಯೆಯಾಗಿದೆ. ಮಳೆಗಾಲ ವಾಗಿರುವುದರಿಂದ ಮಕ್ಕಳಿಗೆ ಊಟ ಮಾಡಲು ಸಮಸ್ಯೆ ಯಾಗುತ್ತಿದೆ ಎಂದು ಸದಸ್ಯರು ಹೇಳಿದರು.
ಮೇ. 24ರಂದು ಸಂಜೆ ನೂತನ ಅಂಗನವಾಡಿ ಕೇಂದ್ರ ವನ್ನು ಶಾಸಕರು ಉದ್ಘಾಟನೆ ಮಾಡಲಿದ್ದಾರೆ ಎಂದು ಅಧ್ಯಕ್ಷರು ಉತ್ತರಿಸಿ ಚರ್ಚೆಗೆ ತೆರೆ ಎಳೆದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ಸಮರ್ಪಕ ವಾಗಿ ನಡೆದಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು. ಪಾರ್ಪಳ ಕಾಲನಿ ಯಲ್ಲಿ ಶಾಲೆಗೆ ಹೋಗದೆ ಇರುವ ಮಕ್ಕಳ ವಿಷಯ ಸದಸ್ಯರು ಸಭೆಯಲ್ಲಿ ಪ್ರಸ್ತಾವಿಸಿ ಚರ್ಚೆ ನಡೆಸಿದರು.
ಉಪಾಧ್ಯಕ್ಷೆ ಜಯಶ್ರೀ, ಸದಸ್ಯ ರಾದ ನಾರಾಯಣ ನಾಯಕ್,ಮೋಹನ ನಾಯ್ಕ , ಅಬೂಬಕ್ಕರ್,ಸುಭಾಶ್, ಸುಲೋಚನಾ , ವಿಮಲ, ಉಪಸ್ಥಿತರಿದ್ದರು.
ಪ್ತಭಾರ ಪಿಡಿಒ ಆಶಾ ಸ್ವಾಗತಿಸಿ, ವಂದಿ ಸಿದರು.