ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಪುತ್ತೂರು

news-details

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಹಾಗೂ ಅರಿವು ಕೇಂದ್ರ ಇವುಗಳ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ ಶಿಬಿರವನ್ನು ಉಧ್ಘಾಟಿಸಿದರು.
ಮಕ್ಕಳಿಗೆ ಕ್ರಾಫ್ಟ್, ಡ್ರಾಯಿಂಗ್, ಜಾದೂ, ಫನ್ನಿ ಗೇಮ್ಸ್, ಪಕ್ಷಿಗಳ ಜೀವನ ಕ್ರಮ, ಆಹಾರಕ್ರಮ, ಅವುಗಳ ವಲಸೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಇವರು ಮಕ್ಕಳಿಗೆ ಶಿಬಿರದ ಸದುಪಯೋಗವನ್ನು ತಿಳಿಯಪಡಿಸುವ ಮೂಲಕ ಶುಭಹಾರೈಸಿದರು. ಕಾರ್ಯಕ್ರಮದ ಸುಗಮಕಾರರಾಗಿ ತೇಜಸ್ವಿನಿ ಚೇತನ್ ಬೊಮ್ಮೆಟ್ಟಿ ಹಾಗೂ ಸುಜಾತ ರವರು ಭಾಗವಹಿಸಿದರು. ಶಿಕ್ಷಣ ಫೌಂಡೇಶನ್ ನ ಜಿಲ್ಲಾ ಸಂಯೋಜಕ ಲವಿಶ್ ಮಕ್ಕಳನ್ನು ವಿವಿಧ ಆಟಗಳ ಮೂಲಕ ಮನರಂಜಿಸಿದರು. ಶಿಬಿರದಲ್ಲಿ 23 ಮಕ್ಕಳು ಭಾಗವಹಿಸಿ ಸದುಪಯೋಗವನ್ನು ಪಡೆದು ಕೊಂಡರು. ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಯಿತು.
ಸಂದ್ಯಾ ,ದ್ವಿತಿ ಉಪಸ್ಥಿತರಿದ್ದರು.
ಅರಿವು ಕೇಂದ್ರದ ಮೇಲ್ವಿಚಾರಕಿ ವಿನುತಾ ಸ್ವಾಗತಿಸಿದರು. ಚಂದ್ರಶೇಖರ ವಂದಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಶೀನಪ್ಪ ಎಂ ಕಾರ್ಯಕ್ರಮ ನಿರೂಪಿಸಿದರು.

news-details