ಪುತ್ತೂರು : ಧರ್ಮ ಶಿಕ್ಷಣವು ಮಕ್ಕಳ ಜೊತೆ ಹಿರಿಯರಿಗೆ ಧರ್ಮದ ಅರಿವು ಆಗಬೇಕಾಗಿದೆ. ಇದೊಂದು ಪುಣ್ಯ ಕಾರ್ಯವಾಗಿದೆ. ಧರ್ಮದಲ್ಲಿ ಅನೇಕತೆಯಲ್ಲಿ ಏಕತೆ ಇರುವುದರಿಂದ ಪ್ರಬಲ ಶಕ್ತಿ ಯಾಗಿ ಹಿಂದೂ ಧರ್ಮ ಬೆಳೆದು ನಿಂತಿದೆ ಎಂದು ದೇವಾಲಯ ಸಂವರ್ಧನ ಸಮಿತಿಯ ವಿಭಾಗ ಪ್ರಮುಖ್,ಪುತ್ತೂರು ಹಿಂದೂ ಧರ್ಮ ಶಿಕ್ಷಣ ಪ್ರವರ್ತಕರಾದ ಮುಳಿಯ ಕೇಶವ ಪ್ರಸಾದ್ ಅಭಿಪ್ರಾಯ ಪಟ್ಟರು.
ಅವರು ಭಾನುವಾರ ಪುತ್ತೂರು ಕಲ್ಲಾರೆ ಶಿವಕೃಪಾ ಸಭಾಭವನದಲ್ಲಿ ನಡೆದ ಧರ್ಮಾಭ್ಯುದಯ,ಪುತ್ತೂರು ತಾಲೂಕು ಸಮಿತಿ ವತಿಯಿಂದ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀಮಧ್ವಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಮಾರ್ಗದರ್ಶನದಲ್ಲಿ ಧರ್ಮಾಭ್ಯುದಯ'ದಲ್ಲಿ ಕಾರ್ಯಕರ್ತರು ಹಾಗೂ ಶಿಕ್ಷಕರಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು
ದೇಗುಲಗಳು ಧಾರ್ಮಿಕ ಕೇಂದ್ರಗಳ ಜೊತೆಯಲ್ಲಿ ಸಮಾಜ ಕೇಂದ್ರ ಆದಾಗ ಹಿಂದಿನ ವೈಭವ ಬರಲು ಕಾರಣ ವಾಗುತ್ತದೆ.ಆ ನಿಟ್ಟಿನಲ್ಲಿ ಯೋಚಿಸುವ ಕಾಲ ಬಂದಿದೆ. ಮಠಾಧೀಶರುಗಳು ಸೇರಿ ಧರ್ಮ ಶಿಕ್ಷಣದ ಸಮ್ಮೇಳನ ನಡೆ ಸಿ ನಿರ್ಣಯಗಳನ್ನು ತೆಗೆದುಕೊಂಡು ಧರ್ಮ ಶಿಕ್ಷಣ ಸರ್ವವ್ಯಾಪ್ತಿ ಪಸರಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಪುತ್ತೂರು ತಾಲೂಕು ಧರ್ಮಶಿಕ್ಷಣ ಸಮಿತಿ ಅಧ್ಯಕ್ಷರಾದ ದಂಬೆಕಾನ ಸದಾಶಿವ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದುತ್ವ ವಿಚಾರ ಎಲ್ಲರಿಗೂ ಬೇಕು. ಸ್ವಯಂ ಸೇವಕ ರಾಗಿ ದುಡಿಯೋಣ, ಶೃಂಗೇರಿ ಸ್ವಾಮೀಜಿ ಯವರು ಮಾರ್ಗದರ್ಶನ ದಂತೆ ನಡೆಯೋಣ ಎಂದು ಹೇಳಿದರು
ಚಿಂತಕರು ಹಾಗೂ ವಿದ್ವಾಂಸರಾದ ಲಕ್ಷ್ಮೀಶ ತೋಳ್ವಾಡಿ ಮಾ ತನಾಡಿ ಧರ್ಮ ಪ್ರಕೃತಿ ಸಹಜವಾಗಿ ಬಂದಿದೆ. ಸತ್ಯ ಪ್ರಾಮಾಣಿಕತೆಯೊಂದಿಗೆ ಬೆಳೆದಿದೆ. ಮನಸ್ಸಿನ ಏಕಾಗ್ರತೆಗಾಗಿ ಧ್ಯಾನ ಮಾಡಬೇಕು. ನಾವು ತಪ್ಪು ಮಾಡಿದಾಗ ಎಚ್ಚರಿಸುವುದೇ ಧರ್ಮ. ನಮ್ಮಲ್ಲಿರುವ ಶಕ್ತಿಯನ್ನು ಒಳ್ಳೆಯ ವಿಚಾರಧಾರೆಗಳಿಗೆ ಉಪಯೋಗಿಸೋಣ ಎಂದು ಹೇಳಿದರು.
ಪುತ್ತೂರು ಜಿ.ಎಲ್.ಆಚಾರ್ಯ ಜ್ಯುವೆಲ್ಸ್ ಆಡಳಿತ ನಿರ್ದೇಶಕರಾದ ಬಲರಾಮ ಆಚಾರ್ಯ ಮಾತನಾಡಿ ಇಂದಿನ ಕಾರ್ಯಗಾರ ಉತ್ತಮ ಬೆಳವಣಿಗೆ ಸಾಕ್ಷಿ ಯಾಗುತ್ತಿದೆ, ಸರ್ವ ವ್ಯಾಪ್ತಿ ಯಾಗಬೇಕು ಮಕ್ಕಳಿಗೆ, ಯುವಜನತೆಗೆ ಧರ್ಮ ಶಿಕ್ಷಣ ತಲುಪಿಸುವ ಕಾರ್ಯ ನಡೆಯಬೇಕು. ಖಾಸಗಿ ಶಾಲೆಯಲ್ಲಿ ಮಾಡಿದರೆ ಪರಿಣಾಮ ಬೀರಬಹುದು. ಪರಿಣಾಮಕಾರಿ ಜಾರಿಯಾಗಲಿ. ಎಲ್ಲ ರೀತಿಯ ಸಹಕಾರ ನೀಡಲು ಬದ್ದ ಎಂದು ಹೇಳಿದರು.
ಶೃಂಗೇರಿ ಸ್ವಾಮೀಜಿಯವರ ಶಿಷ್ಯ, ಮಠದ ಪ್ರತಿನಿಧಿ ತೇಜ್ ಶಂಕರ್ ಸೋಮಯಾಜಿ ಮತ್ತು
ಪುತ್ತೂರು ಹಿಂದೂ ಧರ್ಮ ಶಿಕ್ಷಣದ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಗ್ರಾಮೀಣ ಸಮಿತಿಯ ಪದಾಧಿಕಾರಿಗಳು ಮತ್ತು ಶಿಕ್ಷಕರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡರು.
ಸಂಚಾಲಕರಾದ ಕಾವು ಹೇಮನಾಥ್ ಶೆಟ್ಟಿ ಪ್ರಸ್ತಾವನೆಗೈದು ಮಾತನಾಡಿ ಧರ್ಮ ಶಿಕ್ಷಣದ ಜಾಗೃತಿ, ಚಿಂತನೆ ಕಾರ್ಯ ವ್ಯವಸ್ಥಿತವಾಗಿ ನಡೆಯುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಯುತ್ತಿದೆ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಪುತ್ತೂರು ಹಿಂದೂ ಧರ್ಮ ಶಿಕ್ಷಣದ ಪ್ರಧಾನ ಕಾರ್ಯ ದರ್ಶಿ ಬಾಲಕೃಷ್ಣ ಬೋರ್ಕರ್ ರವರು ಧರ್ಮಾಭ್ಯುದಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಶಿಕ್ಷಕಿ ಜ್ಯೋತಿ ಕೋಡಿಯಡ್ಕ ವಂದಿಸಿದರು.
ಪುತ್ತೂರು ಹಿಂದೂ ಧರ್ಮ ಶಿಕ್ಷಣದ ಉಪಾಧ್ಯಕ್ಷರಾದ
ಆರ್ ಸಿ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ :ರಾಕೇಶ್ ಕಮ್ಮಾಜೆ
ವರದಿ:ಮಾಧವ ನಾಯಕ್
9980883407