ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಈಶ್ವರಮಂಗಲ ವಲಯ ಕ್ಕೆ ಸಂಬಂಧಿಸಿದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರ ಮಂಗಲ ಘಟ ಸಮಿತಿ ವತಿಯಿಂದ
ಇತ್ತೀಚೆಗೆ ತೆಂಗಿನ ಮರದಿಂದ ಆಕಸ್ಮಿಕವಾಗಿ ಜಾರಿ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಒಡಿಯೂರು ಶ್ರೀ ದೇವಿ ವಿಕಾಸ ವಾಹಿನಿ ಸ್ವ ಸಹಾಯ ಸಂಘ ನೂಜಿ ಬೈಲು ಇದರ ಅಧ್ಯಕ್ಷರಾದ ಹರೀಶ ನೂಜಿ ಬೈಲು ಇವರ ಕುಟುಂಬಕ್ಕೆ ಧನಸಹಾಯವನ್ನು ವಿತರಿಸಲಾಯಿತು.
ಧನಸಹಾಯವನ್ನು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಶಾಖೆ ಈಶ್ವರಮಂಗಲ ಇದರ ವ್ಯವಸ್ಥಾ ಪಕರಾದ ಶ್ರೀಮತಿ ಸುಜಾತ ಎ . ಈಶ್ವರ ಮಂಗಲ ಘಟ ಸಮಿತಿಯ ಅಧ್ಯಕ್ಷರಾದ ತಾರಾನಾಥ ನೂಜಿ ಬೈಲು . ಕಾರ್ಯದರ್ಶಿಯಾದ ಶ್ರೀಮತಿ ಶಾರದಾ ಮೇನಾಲ . ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ಸುಮತಿ ರೈ ಸಾರ ಕೋಟೆಲು . ಇವರು ಮೃತರ ಪತ್ನಿಯಾದ ಶ್ರೀಮತಿ ಗೀತಾ ಹಾಗೂ ಸತೀಶ ನೂಜಿ ಬೈಲು ಇವರಿಗೆ ಹಸ್ತಂತರಿಸಲಾಯಿತು.