1697 ಮತಗಳ ಅಂತರದಿಂದ ಬಿಜೆಪಿಯ ಅಭ್ಯರ್ಥಿ ಕಿಶೋರ್ ಬಿ. ಆರ್. ಅವರಿಗೆ ಭರ್ಜರಿ ಗೆಲುವು

ಮಂಗಳೂರು

news-details

<p> ಮಂಗಳೂರು  ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಕಿಶೋರ್ ಬಿ. ಆರ್. ಅವರಿಗೆ ಭರ್ಜರಿ ಗೆಲವು. ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್‌ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ನಿರೀಕ್ಷೆಯಂತೆ ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಸುಲಭ ಗೆಲುವು ಸಾಧಿಸಿದ್ದಾರೆ.<br />
ಮತಗಳ ವಿವರ <br />
<strong>ಬಿಜೆಪಿ 3654 <br />
ಕಾಂಗ್ರೆಸ್ -1957<br />
ಎಸ್ ಡಿಪಿಐ -195<br />
ಇತರ -9<br />
 ಅಸಿಂಧು  -87</strong><br />
 ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಇವರು ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ರಾಜು ಪೂಜಾರಿ ಇವರ ವಿರುದ್ದ 1697 ಮತಗಳ  ಅಂತರದಿಂದ ಗೆಲುವು ಸಾಧಿಸಿದರು. <br />
ಉಭಯ ಜಿಲ್ಲೆಗಳ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹಾಗೂ ಶಾಸಕರು ಮತ್ತು ಸಂಸದರು ಈ ಕ್ಷೇತ್ರದ ಮತದಾರರಾಗಿದ್ದರು.<br />
ಒಟ್ಟು  6032ಮತದಾರರಿದ್ದ ಈ ಚುನಾವಣೆಯಲ್ಲಿ 392 ಮತಗಟ್ಟೆಯಲ್ಲಿ 5,906 ಮಂದಿ ತನ್ನ ಪರಿಷತ್ ಸದಸ್ಯನ ಆಯ್ಕೆಗೆ ಮತ ಚಲಾಯಿಸಿದ್ದರು.</p>

<p><br />
ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆಯಿಂದ  ತೆರವುಗೊಂಡ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಅ. 21ರಂದು ಉಪಚುನಾವಣೆ ನಡೆಯಿತು.  ಚುನಾವಣಾ ಕಣದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಒಟ್ಟು ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದರು. ಶೇ. 97.81ರಷ್ಟು ಮತದಾನವಾಗಿತ್ತು .</p>

<p>ಬಿಜೆಪಿ ಅಭ್ಯರ್ಥಿ ಕಿಶೋರ್ ಬಿ. ಆರ್., ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ಎಸ್.ಡಿ.ಪಿ.ಐ. ಅಭ್ಯರ್ಥಿ ಸಾದತ್ ಎಸ್., ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ ಸ್ಪರ್ಧಿಸಿದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಬಿ. ಆರ್., ಗೆಲುವಿನ ಬಾವುಟ ಹಾರಿಸುದರ ಮೂಲಕ ಉಭಯ ಜಿಲ್ಲೆಗಳು ಕೇಸರಿಯ ಭದ್ರಕೋಟೆ ಎಂದು ಪುನಃ ಸಾಬೀತಾಗಿದೆ. </p>

news-details