ಈ ಸಲ ಕಪ್ ನಮ್ದೇ : ಆರ್ ಸಿ ಬಿ ಅಭಿಮಾನಿಯಿಂದ ಹನ್ನೆರಡು ಗಂಟೆ ಉಚಿತವಾಗಿ ಪಾಯಸ ವಿತರಣೆ!!!

ನ್ಯೂಸ್ ಟೈಮ್ ವಿಶೇಷ

news-details

RCB ಕ್ರಿಕೆಟ್ ತಂಡದ ಅಪ್ಪಟ ಅಭಿಮಾನಿಯೋರ್ವ ತನ್ನ ಹೋಟೆಲ್ ನಲ್ಲಿ ಐಪಿಎಲ್ ನಲ್ಲಿ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದಕ್ಕೆ ಗ್ರಾಹಕರಿಗೆ ಎಲ್ಲರಿಗೂ ಉಚಿತವಾಗಿ ಒಂದು ಕಪ್ ಪಾಯಸ ವನ್ನು ನೀಡಿ ತನ್ನ ಮಾತನ್ನು ಉಳಿಸಿಕೊಂಡಿದ್ದಾರೆ.ಪಾಣಾಜೆ
ಆರ್ಲಪದವಿನ ಶ್ರೀಮಾತಾ ಹೊಟೇಲ್ ಮಾಲೀಕರಾದ ನಂದಕುಮಾರ್ ರಾವ್ 18ವರ್ಷದ ಕನಸು ಮಂಗಳವಾರ ನನಸು ಆಯಿತು . RCB ಟ್ರೋಫಿ ಗೆದ್ದು ಚಾಂಪಿಯನ್ ಆದರೆ ತನ್ನ ಹೋಟೆಲ್ ನಲ್ಲಿ ಪಾಯಸ ನೀಡುತ್ತೇನೆ ಎಂಬುದನ್ನು ಹೇಳಿ ಹೇಳಿ 17 ವರ್ಷ ಕಳೆದು ಹೋಗಿತ್ತು.
ಈ ಬಾರಿ 2025 ಜೂನ್ 3 ಕ್ಕೆ 18ನೇ ವರ್ಷ. ಎರಡು ಬಲಿಷ್ಠ ತಂಡಗಳು ಫೈನಲ್ ಪಂದ್ಯಕ್ಕೆ ರೆಡಿಯಾಗಿದ್ದವು.ಜಿದ್ದಾಜಿದ್ದಿನ ಪಂದ್ಯದಲ್ಲಿ ಟ್ರೋಫಿ RCB ಗೆದ್ದಿತು.
RCBಯ ಅಪ್ಪಟ ಅಭಿಮಾನಿಯಾದ ನಂದಣ್ಣರವರು ಐಪಿಎಲ್ ಆರಂಭ ಆದಾಗಿಂದ ನಂದಣ್ಣ ಪಾಯಸ ಕೊಡುತ್ತೇನೆ ಎಂದು ಹೇಳುತ್ತಿದಾಗ ಅದಕ್ಕೆ ವಿರುದ್ಧವಾಗಿ ಎಷ್ಟು ಸಲ ಮೂದಲಿಕೆಯ ವ್ಯಂಗ್ಯ ಮಾತುಗಳು, ಟ್ರೊಲ್, ಟೀಕೆಗಳು ಎದುರಾದವು. ಆದರೂ ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳದೇ ಒಂದು ದಿನವಾದ್ರೂ RCB ಟ್ರೋಫಿ ಗೆಲ್ಲುತ್ತೆ ಎಂಬ ವಿಶ್ವಾಸ ಅವರಲ್ಲಿತ್ತು.
ಎಷ್ಟೇ ಖರ್ಚು ಆದರೂ ಪಾಯಸ ಕೊಟ್ಟೆ ಕೊಡುತ್ತೇನೆ ಎಂಬ ನಂಬಿಕೆ ಅವರಲ್ಲಿತ್ತು.ಜೂನ್ 3 ರಂದು ಐಪಿಎ ಲ್ ಫೈನಲ್ ಪಂದ್ಯದಲ್ಲಿ RCB ಗೆಲುವು ಸಾಧಿಸಿದ್ದು 18ವರ್ಷದ ಕನಸು ನನಸಾಯಿತು ಇದರ ಅಂಗವಾಗಿ ಜೂನ್ 4 ರಂದು ಬೆಳಗ್ಗೆ 7 ಗಂಟೆಯಿಂದಲೇ ಸಂಜೆ 7ಗಂಟೆ ವರೆಗೆ ಸೇಮಿಗೆ ಪಾಯಸ ಹೋಟೆಲ್ ಬಂದವರಿಗೆ ಉಚಿತವಾಗಿ ನೀಡಿದ್ದಾರೆ. ಯಾರೇ ಬಂದ್ರು tea ಕುಡಿಬೇಕು ಅಂತೇನಿಲ್ಲ ಎಲ್ಲರಿಗೂ ಬಂದವರಿಗೂ RCB ಗೆದ್ದ ಪರವಾಗಿ 1 ಕಪ್ ಪಾಯಸ ನೀಡಿದ್ದಾರೆ.
ಸುಮಾರು 200ಕ್ಕಿಂತಲೂ ಹೆಚ್ಚು ಗ್ರಾಹಕರು ಇವತ್ತು ಹೋಟೆಲ್ ಗೆ ಬಂದಿದ್ದಾರೆ. ತುಂಬಾ ಸಂತೋಷದ ದಿನ ವಾಗಿತ್ತು.18ವರ್ಷದ ಕನಸು ನನಸಾಗಿದೆ ಎಂದು ನಂದ ಕುಮಾರ್ ರಾವ್, ಮಾಲೀಕರು ಹೇಳುತ್ತಾರೆ

news-details