ಜೂನ್ 8:ಶ್ರೀ ಪಂಚಲಿಂಗೇಶ್ವರ ಕಲಾಕೇಂದ್ರ ಈಶ್ವರಮಂಗಲ ನೇತೃತ್ವದಲ್ಲಿ ರಂಗ ಪ್ರವೇಶ ಮತ್ತು ಯಕ್ಷಗಾನ ತಾಳಮದ್ದಳೆ

ಪುತ್ತೂರು

news-details

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಕಲಾಕೇಂದ್ರ ಇದರ ನೇತೃತ್ವದಲ್ಲಿ ರಂಗ ಪ್ರವೇಶ ಮತ್ತು ಯಕ್ಷಗಾನ ತಾಳಮದ್ದಳೆಯು ಜೂನ್ 8ರಂದು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.
ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಹಿರಿಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಯಕ್ಷಗಾನ ಹಿಮ್ಮೇಳ ತರಗತಿಯ ವಿದ್ಯಾರ್ಥಿಗಳಾದ ಅನ್ವಿತ್, ಘನತ್, ವೇದಾಂಶ್ ಸಾದ್ವಿನ್, ಸ್ವರೂಪ್, ಆಶಿಶ್ ಸಹಜ್, ಸಾತ್ವಿಕ್, ವಿಧಿತ್ ಗೌರೀಶ್, ಅಮೃತ್‌ ಅದೀಶ್, ತುಷಾರ್ ಇವರಿಂದ ರಂಗಪ್ರವೇಶ.
ಸಭಾ ಕಾರ್ಯಕ್ರಮದಲ್ಲಿ ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಮಂಜುನಾಥ ರೈ ಸಾಂತ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಹಿರಿಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಗೆ ಗೌರವಾರ್ಪಣೆ ನಡೆಯಲಿದೆ.
ಮದ್ದಳೆ ವಾದಕರು ಮತ್ತು ಹಿಮ್ಮೇಳ ಗುರುಗಳಾದ ಶ್ರೀಧರ ವಿಟ್ಲ,ಲವಕುಮಾ‌ರ್ ಐಲ ಇವರಿಗೆ ಗುರುವಂದನೆ ನಡೆಯಲಿದೆ.
ಅತಿಥಿಗಳಾಗಿ ಹಿರಿಯ ಅರ್ಥದಾರಿಗಳಾದ ಜಬ್ಬಾರ್ ಸಮೋ ಸಂಪಾಜೆ, ರತನ್ ಕುಮಾರ್ ಕರ್ನೂರುಗುತ್ತು, ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮದರ್ಶಿಗಳಾದ ಶಿವರಾಮ್ ಪಿ,ಯಕ್ಷಗಾನ ಕಲಾವಿದರಾದ ಉಬರಡ್ಕ ಉಮೇಶ್ ಶೆಟ್ಟಿ,ಪೆರ್ಲ ಜಗನ್ನಾಥ ಶೆಟ್ಟಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಯಕ್ಷಗಾನ ತಾಳಮದ್ದಳೆ"ಶರಸೇತು ಬಂಧನ ” ನಡೆಯಲಿದೆ.
ಭಾಗವತರಾಗಿ ದೇವರಾಜ ಆಚಾರ್ಯ ಐಕಳ, ಭರತ್ ಶೆಟ್ಟಿ ಸಿದ್ಧಕಟ್ಟೆ,ಚೆಂಡೆ/ಮದ್ದಳೆಯಲ್ಲಿ ಶ್ರೀಧರ ವಿಟ್ಲ, ಲವಕುಮಾರ್ ಐಲ, ಅರ್ಥದಾರಿಗಳಾಗಿ ಜಬ್ಬಾರ್ ಸಮೋ ಸಂಪಾಜೆ ಸಂಪಾಜೆ,ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಅವಿನಾಶ್ ಶೆಟ್ಟಿ ಉಬರಡ್ಕ ಭಾಗವಹಿಸಲಿದ್ದಾರೆ ಎಂದು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಕಲಾಕೇಂದ್ರದ ಪ್ರಕಟಣೆ ತಿಳಿಸಿದೆ.

news-details