<p>ಬಡಗನ್ನೂರು ಗ್ರಾಮದ ಸಜಂಕಾಡಿ ಕಾಲನಿಯಲ್ಲಿ ಅಶೋಕ ಜನಮನ ಕಾರ್ಯಕ್ರಮದ ಪ್ರಚಾರ ಸಭೆ ನಡೆಯಿತು.<br />
ಸಭೆಯಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ ರೈ ಸಜಂಕಾಡಿ ಸ್ವಾಗತಿಸಿದರು. ಟ್ರಸ್ಟ್ ನ ಗೌರವ ಸಲಹೆಗಾರರಾದ ಮಹಮ್ಮದ್ ಬಡಗನ್ನೂರು ರವರು, ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಯವರ ಜನಮನ ಕಾರ್ಯಕ್ರಮದ ಎಲ್ಲಾ ವಿವರಗಳನ್ನು ಸಭೆಯಲ್ಲಿ ತಿಳಿಸಿ ಶಾಸಕರ ಪರವಾಗಿ ಎಲ್ಲರನ್ನೂ ಆಹ್ವಾನಿಸಿದರು.<br />
ಸಭೆಯಲ್ಲಿ ಮುಖಂಡರಾದ ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಗೋಪಾಲ ಸಜಂಕಾಡಿ, ಲೋಕೇಶ್ ರೈ ಸಜಂಕಾಡಿ, ಬಟ್ಯ ಸಜಂಕಾಡಿ, ವಾಮನ ಮತ್ತು ಇತರರು ಉಪಸ್ಥಿತರಿದ್ದರು.</p>