ನ.14 ರಿಂದ 17 ರವರೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ

ಪುತ್ತೂರು

news-details

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ಸೀಮೆಯ ಮೊದಲ ಜಾತ್ರೆಯಾಗಿದ್ದು ಬ್ರಹ್ಮಶ್ರೀ ಕೆಮ್ಮಿ oಜೆ ನಾಗೇಶ್ ತಂತ್ರಿ ಗಳ ನೇತೃತ್ವದಲ್ಲಿ ನ.14 ರಿಂದ 17 ರವರೆಗೆ ನಡೆಯಲಿದೆ.
ನ. 14 ರಂದು ಬೆಳಿಗ್ಗೆ ಗಂಟೆ 9:00 ರಿಂದ ಬಲಿವಾಡು ಶೇಖರಣೆ ರಾತ್ರಿ ಶ್ರೀ ಮಹಾಗಣಪತಿ ದೇವರ ಪೂಜೆ. ನ. 15ರಂದು ಗಣಪತಿ ಹೋಮ, ನವ ಕಲಶ ಅಭಿಷೇಕ,ತುಲಾಭಾರ ಸೇವೆ, ಮಹಾಪೂಜೆ, ದೇವರ ಬಲಿ,ಪ್ರಸಾದ ವಿತರಣೆ,ಬ್ರಹ್ಮ ಸಮಾರಾಧನೆ.ರಾತ್ರಿ ಗಂಟೆ 9ಕ್ಕೆ ಮಹಾಪೂಜೆ,ಉತ್ಸವ ಶ್ರೀದೇವರ ಭೂತ ಬಲಿ.
ದೇವರ ಬಲಿ ಹೊರಟು ಕಟ್ಟೆ ಪೂಜೆ, ಬಿಲ್ವಗಿರಿ ಪ್ರವೇಶ,ಕೆರೆ ಉತ್ಸವ ಪುನಃ ದೇವಾಲಯಕ್ಕೆ ಬಂದು ದೇವರ ಒಳಗಾಗಿ ಮಂಗಳಾರತಿ.
ನ. 16 ಪೂರ್ವಾಹ್ನ ಗಂಟೆ 10ರಿಂದ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ,ಮಂತ್ರಾಕ್ಷತೆ,ಮಹಾಪೂಜೆ,ಅನ್ನ ಸಂರ್ಪಣೆ
ರಾತ್ರಿ ಗಂಟೆ 9 ದೇವರ ಮಹಾಪೂಜೆ, ಶ್ರೀ ಜಠಾಧಾರಿ ದೈವದ ಬಂಡಾರ ತೆಗೆಯುವುದು.ರಾತ್ರಿ ಗಂಟೆ 1.00ಕ್ಕೆ ಶ್ರೀ ಜಠಾಧಾರಿ ದೈವದ ಮಹಿಮೆ.
ನ. 17 ರಂದು ಪೂರ್ವಾಹ್ನ ಗಂಟೆ 8-00 ಕ್ಕೆ ಧೂಮಾವತಿ ನೇಮ, ಮಧ್ಯಾಹ್ನ ಮಹಾಪೂಜೆ,ಅಪರಾಹ್ನ ಗಂಟೆ 2-00 ಹುಲಿ ಭೂತನೇಮ ನಡೆಯಲಿದೆ.
ನ. 15ರಂದು ಸಂಜೆ ಗಂಟೆ 7:00 ರಿಂದ 9ರ ತನಕ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ,
ರಾತ್ರಿ ಬಿಲ್ವಗಿರಿ ಕಟ್ಟೆ ಪೂಜೆಯ ಸಂದರ್ಭದಲ್ಲಿ ಊರ ಹತ್ತು ಸಮಸ್ತರಿಂದ ಬೆಟ್ಟಂಪಾಡಿ ಬೆಡಿ ನಡೆಯಲಿರುವುದು. ನ. 16ರಂದು ರಾತ್ರಿ ಗಂಟೆ 9:00 ರಿಂದ 1-00ವರೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೊಡುವಿಕೆಯಿಂದ ಯಕ್ಷಗಾನ ತಾಳಮದ್ದಲೆ ಜರಗಲಿದೆ. ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ದೇವರ ಮತ್ತು ದೈವಗಳ ಪ್ರಸಾದವನ್ನು ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ ವಿನೋದ್ ಕುಮಾರ್ ಬಳ್ಳಾಲ್ ಶಿವಗಿರಿ ಬೀಡು ಮತ್ತು ಮೊಕ್ತೇಸರರಾದ ವಿನೋದ್ ಕುಮಾರ್ ರೈ ಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

news-details