ಇಟಲಿ ಮೂಲದ ಮೀರ್‌ ಗ್ರೂಪ್‌ ಜೊತೆ ಮಂಗಳೂರಿನ ಎಸ್‌ಇಝಡ್‌ ಕಂಪನಿ ಒಪ್ಪಂದ

ಮಂಗಳೂರು

news-details

ಇಟಲಿಯ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಸಾಮಗ್ರಿ ಉತ್ಪಾದನಾ ಕಂಪನಿಯಾಗಿರುವ ಮೀರ್‌ಗ್ರೂಪ್‌ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದು ಈ ಕುರಿತು ಗುರುವಾರ ಒಪ್ಪಂದ ಮಾಡಿಕೊಂಡಿದೆ.

ಇಂದು ನಗರದ ಓಷನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್‌ಚೌಟ ಅವರ ಸಮಕ್ಷಮದಲ್ಲಿ ಎಂಎಸ್‌ಇಝಡ್ ಸಿಇಒ ಸೂರ್ಯನಾರಾಯಣ ರಾವ್ ಹಾಗೂ ಮೀರ್‌ಗ್ರೂಪ್‌ನ ಮುಖ್ಯಸ್ಥ ರಫೇಲೆ ಮರಾಝೊ ಅವರು ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ಸಮಾರಂಭದಲ್ಲಿ , ದಕ್ಷಿಣಕನ್ನಡ ಸಂಸದಕ್ಯಾಪ್ಟನ್ ಬ್ರಿಜೇಶ್‌ಚೌಟಅವರು ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಮಾತನಾಡಿದ ಚೌಟ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ ಮಾತಿನಂತೆ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ದೊರೆಯಬೇಕು ಅಲ್ಲದೆ , ಊರಿನ ಯುವಕರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗದೆ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲೇ ಉದ್ಯಮಗಳನ್ನು ಸ್ಥಾಪಿಸಲು ಹುಟ್ಟೂರಿನಿಂದ ದೂರ ಹೋಗಿರುವ ಸ್ಥಳೀಯರನ್ನು ಪ್ರೇರೇಪಿಸುವ ಕೈಗೊಂಡಿದ್ದು, ಅದರ ಅಂಶವಾಗಿ ಮಂಗಳೂರು ಜಿಲ್ಲೆಗೆ ಬಂಡವಾಳವನ್ನು ತರುವ ಉದ್ದೇಶದಿಂದ. ಅವರು“ಬ್ಯಾಕ್‌ಟುಊರು” ಎಂಬ ಉಪಕ್ರಮದೊಂದಿಗೆ ಜಿಲ್ಲೆಗೆ ಅಭಿವೃದ್ಧಿಯ ಬಗ್ಗೆ ಉತ್ಸುಕರಾಗಿದ್ದೇವೆ.ಅದರ ಭಾಗವಾಗಿ ಇಂದು ಇಟಲಿಯ ಕಂಪನಿ ಮಂಗಳೂರಿನ ಎಸ್ ಈ ಝಡ್ ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ ಎಂದರು. ಮಂಗಳೂರು ಮೂಲದ ನಿತಿಕ್‌ರತ್ನಾಕರ್‌ ಅವರು ಮೀರ್‌ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದು, ಮಂಗಳೂರಿನಲ್ಲಿ ಕಂಪನಿ ಹೂಡಿಕೆಗೆ ಬಲವಾದ ಬೆಂಬಲ ನೀಡಿದ್ದಾರೆ. ಈ ಮೂಲಕ 1500 ಕೋಟಿರೂ.ನಷ್ಟು ಹೂಡಿಕೆಯಾಗಲಿದ್ದು, 500-600 ಮಂದಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದರು.

ಇದು ಒಂದು ವಿದೇಶಿ ನೇರ ಹೂಡಿಕೆಯಾಗಿದ್ದು ಮೀರ್‌ಗ್ರೂಪ್‌ನ ಮುಖ್ಯಸ್ಥರು ಹಾಗೂ ಸಂಸದಕ್ಯಾಪ್ಟನ್ ಬ್ರಿಜೇಶ್‌ಚೌಟ ಶನಿವಾರ ದಿಲ್ಲಿಗೆ ತೆರಳಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲಿದ್ದಾರೆ.ಮೊದಲ ಹಂತದಲ್ಲಿ ಅವರು ಎಸ್‌ಇಝಡ್‌ನಲ್ಲಿ 10 ಎಕ್ರೆ ಜಾಗ ಕೇಳಿದ್ದು, ಮುಂದೆ ಹಂತ ಹಂತವಾಗಿ ಇನ್ನಷ್ಟು ಉದ್ಯಮ ವಿಸ್ತರಣೆ ಮಾಡುವ ನಿರೀಕ್ಷೆಗಳಿವೆ, ಮುಂದಿನ ಎರಡು ವರ್ಷಗಳಲ್ಲಿ ಕಂಪನಿ ಕಾರ್ಯಾರಂಭಿಸುವ ಸಾಧ್ಯತೆಗಳಿವೆ ಎಂದರು.

ಈ ವೇಳೆ ಮಾತನಾಡಿದ ಎಂಎಸ್‌ಇಝಡ್ ಸಿಇಒ ಸೂರ್ಯನಾರಾಯಣ ವಿ ಅವರು, ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಮೂಲಸೌಕರ್ಯ, ಮಂಗಳೂರಿನ ಬಂದರು ಸೌಲಭ್ಯ ಮತ್ತಿತರ ಮಹತ್ವವನ್ನುಅರಿತುಕೊಂಡಿರುವ ಮೀರ್‌ಗ್ರೂಪ್‌ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ನಿರ್ಮಿಸುವ ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಲಿದೆ ಎಂದರು.

ಮೀರ್‌ಗ್ರೂಪ್ ಸಿಇಒ ರಫೇಲೆ ಅವರು ಮಾತನಾಡಿ, ಮಂಗಳೂರು ನಮಗೊಂದು ಮುಖ್ಯವಾದ ಸ್ಥಳವಾಗಿದ್ದು, ಇಲ್ಲಿ ನಮ್ಮಉತ್ಪಾದನಾ ಘಟಕ ಸ್ಥಾಪಿಸಲಿದ್ದೇವೆ, ಈ ಮೂಲಕ ಮಧ್ಯಪ್ರಾಚ್ಯ, ಆಫ್ರಿಕನ್ ರಾಷ್ಟ್ರಗಳಿಗೆ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ರಫ್ತು ಮಾಡುವುದು ಸುಲಭವಾಗಲಿದೆ ಎಂದು ನುಡಿದರು.
ಪರಿಸರಕ್ಕೆಯಾವುದೇ ತೊಂದರೆಯಾಗದ ಕಾರ್ಬನ್ ನೆಗೆಟಿವ್ ಕಟ್ಟಡಗಳನ್ನು ನಿರ್ಮಿಸುವುದು ನಮ್ಮಆದ್ಯತೆ, ಸೋಲಾರ್ ಪ್ಯಾನೆಲ್ ಒಳಗೊಂಡ ಗೋಡೆಗಳು, ಇತರ ಸುಸ್ಥಿರ ಆವಿಷ್ಕಾರಿ ಉತ್ಪನ್ನಗಳು ಇರಲಿವೆ. ನಮಗೆ 45 ಎಕ್ರೆಯಷ್ಟುಜಾಗಒಟ್ಟು ಬೇಕಾಗಬಹುದು, ಒಟ್ಟುಯೋಜನೆ ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.

ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮಂಗಳೂರು ಮೂಲದ ನಿತಿಕ್‌ರತ್ನಾಕರ್‌ ಅವರು ಮಾತನಾಡಿ, ಮಂಗಳೂರನ್ನು ಹಸಿರು ಇಂಧನದ ಕೇಂದ್ರವನ್ನಾಗಿ ಮಾಡುವ ಗುರಿ ಇದೆ. ಇದು ಕೇವಲ ದೇಶಕ್ಕಷ್ಟೇ ಅಲ್ಲದೆ ಜಾಗತಿಕ ಮಾರುಕಟ್ಟೆಗೂ ನೆರವಾಗಲಿದೆ.ಕಲ್ಲು ,ಇಟ್ಟಿಗೆಯ ಗೋಡೆಗಳ ಪರ್ಯಾಯವಾಗಿ ಸೋಲಾರ್ ಪ್ಯಾನೆಲ್ ಸಹಿತವಾದ, ವಿದ್ಯುತ್‌ಉತ್ಪಾದಿಸುವಂತಹ ಗೋಡೆಗಳನ್ನು ಕಂಪನಿ ಸಿದ್ಧಪಡಿಸುತ್ತದೆ ಎಂದರು.
ಮೀರ್‌ ಕಂಪನಿಯ ಕಾನೂನು ಘಟಕ ಮುಖ್ಯಸ್ಥಕ್ಲಾಡಿಯೊ, ಚಂದ್ರುಪರ್ವತ್‌ರೆಡ್ಡಿ ಉಪಸ್ಥಿತರಿದ್ದರು.

news-details