ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಎಂಬಲ್ಲಿ ಕಾಸರಗೋಡಿನ ಪರಪೆಯಿಂದ ಮುಗೇರು ಯರು ಸುಳ್ಯ ತಾಲೂಕು ಕನಕಮಜಲು ರಕ್ಷಿತಾ ಅರಣ್ಯ ಪ್ರದೇಶ ವಾಗಿದೆ.
ಈಗಾಗಲೇ ಹಲವು ಬಾರಿ ಪೆರ್ನಾಜೆ, ಕಾವು ಆಮಚ್ಚಿನಡ್ಕ ಮುಂತಾದ ಪ್ರದೇಶಗಳಿಗೆ ಕಾಡಾನೆ ಬಂದು ಕೃಷಿ ಹಾನಿ ಮಾಡಿದೆ. ಕಳೆದ ಮೂರು ದಿನಗಳಿಂದ ರೈತ ಕುಮಾರ ಪೆರ್ನಾಜೆ ಜಮೀನಿಗೆ ಕಾಡಾನೆ ಬಂದು ಬಾಳೆ ತೋಟವನ್ನು ಚಿದ್ರಗೊಳಿಸಿದೆ.25ಕ್ಕೂ ಮಿಕ್ಕಿ ಬಾಳೆ ಗಿಡಗಳನ್ನು ನಾಶ ಮಾಡಿದ್ದು ಅಡಿಕೆ ಗಿಡವು ಬಹಳಷ್ಟು ಹಾನಿಯಾಗಿದೆ .
ಕೃಷಿಕರನ್ನು ಕಾಡಾನೆ ಹೈರಾಣ ಮಾಡಿಸುತ್ತಿದ್ದು. ಅಲ್ಲದೆ ಇದಕ್ಕೆಲ್ಲ ಸರಕಾರ ಸೂಕ್ತ ಪರಿಹಾರ ನೀಡುವುದು ಮಾತ್ರವಲ್ಲದೆ ಕಾಡಾನೆಗಳನ್ನು ಇಲ್ಲಿಂದ ತೆರವು ಮಾಡುವ ಕಾರ್ಯ ಆಗಬೇಕಾಗಿ ಊರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟು ವರ್ಷಗಳಿಂದ ಎಲ್ಲೂ ಇಲ್ಲದ ಆನೆಗಳು ರಾಜಾರೋಷವಾಗಿ ರೈತರ ಕೃಷಿ ಭೂಮಿಗಳಿಗೆ ದಾಳಿ ಮಾಡುತ್ತಿದೆ. ಅವುಗಳ ಇಲ್ಲಿಗೆ ಹೇಗೆ ಬಂದಿವೆ ಎಂಬುದೇ ಎಲ್ಲರ ಯಕ್ಷಪ್ರಶ್ನೆಯಾಗಿದೆ.
ಒಂದೆಡೆ ಕೂಲಿ ಆಳುಗಳ ಸಮಸ್ಯೆ ಇನ್ನೊಂದೆಡೆ ಅಡಿಕೆಗೆ ಎಲೆ ಚುಕ್ಕಿ ರೋಗ ಮತ್ತೊಂದೆಡೆ ಅಡಿಕೆಗೆ ಕ್ಯಾನ್ಸರ್ ಕಾರಕ ವರದಿಯಿಂದ ಕಂಗೆಟ್ಟ ರೈತ.
ಪ್ರಕೃತಿಯ ಮುನಿಸು ಎಲ್ಲವನ್ನು ರೈತರು ನಿಭಾಯಿಸಬೇಕಾಗಿದೆ.