ಗೆಜ್ಜೆಗಿರಿಯಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಮಂಗಳೂರು

news-details

<p>ತುಳುನಾಡಿನ ಕಾರ್ಣಿಕ ಕ್ಷೇತ್ರವಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ &nbsp;ಬೆಳಗುತ್ತಿದೆ :ಜಗನ್ನಾಥ್ ಬಂಗೇರ&nbsp;<br />
ತುಳುನಾಡಿನ ಕಾರ್ಣಿಕ ಕ್ಷೇತ್ರವಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ &nbsp;ಬೆಳಗುತ್ತಿದೆ ಎಂದು &nbsp;ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರ ಆಪ್ತ ಸಹಾಯಕ &nbsp;ಜಗನ್ನಾಥ್ ಬಂಗೇರ ಮುಗ್ಗಗುತ್ತು &nbsp;ಹೇಳಿದರು.&nbsp;<br />
ಅವರು &nbsp; ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ &nbsp;9 ದಿವಸಗಳ ಕಾಲ ನಡೆಯುವ &nbsp;ನವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಯಾವುದೇ &nbsp;ಧಾರ್ಮಿಕ ಅಥವಾ &nbsp;ಸಾಮಾಜಿಕ ಕ್ಷೇತ್ರದ ವೇದಿಕೆಯಲ್ಲಿ &nbsp;ಮಾತನಾಡುವುದು ಸುಲಭ &nbsp; ಆದರೆ &nbsp;ಅದನ್ನು ಮುನ್ನಡೆಸುವುದು ಕಷ್ಟ &nbsp;ಒಂದು ಧಾರ್ಮಿಕ ಕ್ಷೇತ್ರ ನಡೆಸಲು ಬಲು ಕಷ್ಟ &nbsp;ನಿಟ್ಟಿನಲ್ಲಿ &nbsp;ಶ್ರೀ ಕ್ಷೇತ್ರ ಎಲ್ಲಾ ಭಕ್ತಾದಿಗಳ ಸಹಕಾರದಿಂದ ಮತ್ತು ಉತ್ತಮ ಆಡಳಿತ ಮಂಡಳಿ ವ್ಯವಸ್ಥೆಯಿಂದ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ವ್ಯಕ್ತಪಡಿಸಿದರು. ಅವರು &nbsp; ಶ್ರೀ ಕ್ಷೇತ್ರ ಇಂದು ತುಳುನಾಡಿನ ಕಾರ್ಣಿಕ ಕ್ಷೇತ್ರವಾಗಿ &nbsp;ಬೆಳಗುತ್ತಿದೆ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಎಲ್ಲರನ್ನೂ ಶ್ರೀ ದೇಯಿಬೈದೈತಿ &nbsp;ಕೋಟಿ ಚೆನ್ನಯರು ಅರೋಗ್ಯ ನೀಡಿ &nbsp;ಕ್ಷೇತ್ರ ಬೆಳಗಲು ಆಶೀರ್ವದಿಸಲಿ ಎಂದು ಹೇಳಿ ಶುಭ ಹಾರೈಸಿದರು &nbsp;ಕಾರ್ಯಕ್ರಮವು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ &nbsp;ಪೀತಾಂಬರ ಹೆರಾಜೆ ರವರ ಅಧ್ಯಕ್ಷತೆಯಲ್ಲಿ &nbsp;ನಡೆಯಿತು.&nbsp;<br />
ಆರಂಭದಲ್ಲಿ &nbsp;ಗಣಪತಿ ಹವನ ನೆರವೇರಿಸಲಾಯಿತು ಬಳಿಕ &nbsp;ತೆನೆ ಕಟ್ಡುವ ಮೂಲಕ ಸಂಭ್ರಮಾಚರಣೆ ನಡೆಯಿತು ಬಳಿಕ ಶ್ರೀ ಧೂಮಾವತಿ ದೇವಸ್ಥಾನದಲ್ಲಿ ಮಹಾಮಂಗಳಾರತಿ , &nbsp;ಮಹಾ ಮಾತೆ ದೇಯಿ ಬೈದೆತಿಗೆ &nbsp;ವಿಶೇಷ &nbsp;ಪುಷ್ಪಲಂಕಾರ ಮಹಾಪೂಜೆಯ &nbsp;ಬಳಿಕ ಅನ್ನಸಂತರ್ಪಣೆ ನೆರವೇರಿತು.<br />
ಭಜನಾ ಕಾರ್ಯಕ್ರಮ;-&nbsp;<br />
ಪಡುಮಲೆ ಸರ್ವಶಕ್ತಿ ಮಹಿಳಾ ಭಜನಾ ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. &nbsp;<br />
ಕಾರ್ಯಕ್ರಮದಲ್ಲಿ ,ಸಮಿತಿ ಗೌರವ ಅಧ್ಯಕ್ಷ ಜಯಂತ ನಡುಬೈಲ್, &nbsp;ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, &nbsp;ಮೂಕ್ತೇಸರ &nbsp; ಶ್ರೀಧರ ಪೂಜಾರಿ &nbsp;,ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ &nbsp;ದೀಪಕ್ ಕೋಟ್ಯಾನ್, &nbsp;ಮಾಧ್ಯಮ ವಕ್ತಾರ, ರಾಜೇಂದ್ರ ಚಿಲಿಂಬಿ ,ಜಯರಾಮ್ ಬಂಗೇರ ಕಿನ್ನಿಮಜಲ್, &nbsp;ಸಂತೋಷ್ &nbsp;ಕುಮಾರ್ ಬೈರಂಪಳ್ಳಿ, ನಾಗೇಶ್ ಬೈಕಂಪಾಡಿ, ಶಂಕರಿ ಪಟ್ಟೆ ಹಾಗೂ ಊರ ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.</p>

<p>&nbsp;ಚಿತ್ರ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರ ಆಪ್ತ ಸಹಾಯಕ &nbsp;ಜಗನ್ನಾಥ್ ಬಂಗೇರ ಮುಗ್ಗಗುತ್ತು ನವರಾತ್ರಿ ಮಹೋತ್ಸವ ಉದ್ಘಾಟಿಸಿದರು.</p>

news-details