ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವರ್ಷಾವಧಿ ಶ್ರೀ ದೈವಗಳ ನೇಮೋತ್ಸವವು ಜ.14 ರಿಂದ 19ರವರೆಗೆ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಜ.14 ರಂದು ರಾತ್ರಿ ಭಂಡಾರ ತೆಗೆಯುವುದು, ಬಳಿಕ ಧ್ವಜಾರೋಹಣ,ಬೀರತಂಬಿಲ ನಡೆಯಿತು.
ಜ.15 ರಂದು ಬೆಳಿಗ್ಗೆ ಗಂಟೆ 6ರಂದು ರಿಂದ ವೇದಮೂರ್ತಿ ಶ್ರೀ ವಿಶ್ವಶ್ವೇರ ಭಟ್ ಉದಯಗಿರಿ ಆರ್ಲಪದವು ಇವರ ನೇತೃತ್ವ ದಲ್ಲಿ 48ಕಾಯಿಗಳ ಗಣಪತಿ ಹೋಮ, ಬೆಳಿಗ್ಗೆ ಗಂಟೆ9ರಿಂದ ಆನೆ ಚಪ್ಪರ ಏರಿಸುವುದು,ಮಕರ ತೋರಣ ಏರಿಸುವುದು, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ
,ಬೀರತಂಬಿಲ ನಡೆಯಿತು.
ಜ.16 ರಂದು ಬೆಳಿಗ್ಗೆ 11ಕ್ಕೆ ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.
ಸಂಜೆ ಗಂಟೆ 7.00 ರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯವೈಭವ',ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ,ಬೀರತಂಬಿಲ ನಡೆಯಲಿದೆ.
ಜ.17 ರಂದು ಬೆಳಿಗ್ಗೆ 11ಕ್ಕೆ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ, ಬೀರತಂಬಿಲ,ರಾತ್ರಿ ಗಂಟೆ 8.00ರಿಂದ ಶ್ರೀ ಪೂಮಾಣಿ-ಕಿನ್ನಿಮಾಣಿ ಸಾಂಸ್ಕೃತಿಕ ವೇದಿಕೆ ಪಡುಮಲೆ ಅರ್ಪಿಸುವ ಅಭಿನಯ ಕಲಾವಿದರು, ಉಡುಪಿ, ಇವರು ಅಭಿನಯಿಸುವ ಶಾಂಭವಿ ಕುತೂಹಲಭರಿತ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಜ.18 ರಂದು ಬೆಳಿಗ್ಗೆ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು ಮಲರಾಯ ದೈವದ ನೇಮ, ಬಳಿಕ ವ್ಯಾಘ್ರ ಚಾಮುಂಡಿ (ರಾಜನ್) ದೈವದ ನೇಮ, ಪ್ರಸಾದ ವಿತರಣೆ,ಹಾಗೂ ಅನ್ನಪ್ರಸಾದ ನಡೆಯಲಿದೆ.ಸಂಜೆ 5ಕ್ಕೆ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ಬಂದು, ರಾತ್ರಿ ಪಡುಮಲೆ-ದೊಡ್ಡಮನೆಯಲ್ಲಿ ಅವಭೃತ ಸ್ಥಾನ ನಡೆದು, ಕಟ್ಟೆ ಪೂಜೆ, ಬಳಿಕ ಧ್ವಜಾವರೋಹಣ, ರುದ್ರಚಾಮುಂಡಿ ದೈವದ ನೇಮ, ನವಕಾಭಿಷೇಕ,ಬಳಿಕ ಗುಳಿಗ ದೈವದ ನೇಮ ನಡೆಯಲಿದೆ.ರಾತ್ರಿ 8.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.19ರಂದು ಬೆಳಿಗ್ಗೆ 10ರಿಂದ ಪಡುಮಲೆ ದೇವಸ್ಥಾನದ ಪಿಲಿಮಾಡದ ವಠಾರದಲ್ಲಿ ವ್ಯಾಘ್ರಚಾಮುಂಡಿ ನೇಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕರ್ಣಕುಂಡಲ ಧರಿಸಿದ ದೈವ ನರ್ತಕರಾದ ಡಾ.ರವೀಶ್ ಪಡುಮಲೆ
ಕುಂಬಳೆ ಮೂರು ಸಾವಿರ ಸೀಮೆಯ ಪ್ರಧಾನ ಅರಸು ದೈವಗಳಾದ ಉಳ್ಳಾಕುಲು ದೈವಗಳಿಗೆ ಆದಿ ಪಡುಮಲೆಯಿಂದ ಅಂತ್ಯ ಪುತ್ಯೆಯ ವರೆಗೆ ನರ್ತನ ಸೇವೆಯನ್ನು ನೀಡಿದ ದಿವಂಗತ ನಾಗಪ್ಪ ಪರವರವರ ಉತ್ತರಾಧಿಕಾರಿಯಾಗಿ ಅವರ ಅಳಿಯ ಪ್ರಸಿದ್ಧ ದೈವ ನರ್ತಕರು, ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಉಪನ್ಯಾಸಕರಾದ ಡಾ.ರವೀಶ್ ಪರವ ಪಡುಮಲೆಯವರಿಗೆ ಆದಿ ಪಡುಮಲೆ ಮಾಡದಲ್ಲಿ ಕಿವಿಗೆ ಕರ್ಣಕುಂಡಲವನ್ನು ಧರಿಸಿದರು. ಜ. 16ರಿಂದ ಕುಂಬಳೆ ಮೂರು ಸಾವಿರ ಸೀಮೆಯ ಪ್ರಧಾನ ಅರಸು ದೈವಗಳಾದ ಉಳ್ಳಾಕುಲು ದೈವಗಳಿಗೆ ಆದಿ ಪಡುಮಲೆಯಿಂದ ಅಂತ್ಯ ಪುತ್ಯೆಯ ವರೆಗೆ ನರ್ತನ ಸೇವೆಯನ್ನು ನೀಡಲಿದ್ದಾರೆ.