ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರ : ಸಂಕ್ರಮಣ ಪೂಜಾ ಕಾರ್ಯಕ್ರಮ ಮತ್ತು ಭಕ್ತಾಭಿಮಾನಿಗಳಿಂದ ಕಲಶ ಸೇವೆ

ಪುತ್ತೂರು

news-details

ಮಕರ ಸಂಕ್ರಮಣದ ಶುಭ ದಿನವಾದ ಜ. 14ರಂದು ಸ್ವಾಮಿ ಕೊರಗಜ್ಜ ಕ್ಷೇತ್ರ ಶಬರಿನಗರದಲ್ಲಿ ಸಂಕ್ರಮಣ ಪೂಜಾ ಕಾರ್ಯಕ್ರಮ ಮತ್ತು ಭಕ್ತಾಭಿಮಾನಿಗಳಿಂದ ಕಲಶ ಸೇವೆ ನಡೆಯಿತು.
ಸಂಜೆ ಗಂಟೆ 6-00ರಿಂದ ಸಂಗೀತ ಶಿಕ್ಷಕ ಶ್ರೀ ದಾಮೋದರ ಮರದಮೂಲೆ ಇವರ ಶಿಷ್ಯಂದಿರಿಂದ ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘ, ಶಬರಿನಗರ ಇವರಿಂದ ಭಜನೆ ಕಾರ್ಯಕ್ರಮ ನಡೆಯಿತು.ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಗಿರೀಶ್ ಕನ್ನಡ್ಕ ಇವರು ನೂತನ ರಂಗ ಮಂಟಪವನ್ನುಉದ್ಘಾಟಿಸಿ ಶುಭ ಹಾರೈಸಿದರು.
ನಂತರ ಈಶ್ವರಮಂಗಲ ವರ್ಣಂ ನೃತ್ಯ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಕ್ಷೇತ್ರದಲ್ಲಿ ನಡೆಯುವ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಸುಳ್ಯಪದವು ಹಾಲು ಉತ್ಪಾದಕರ ಸಹಕಾರಿ
ಸಂಘದ ಅಧ್ಯಕ್ಷ ಶ್ರೀ ಅರುಣ್ ಕುಮಾರ್ ಇವರು ಬಿಡುಗಡೆಗೊಳಿಸಿದರು.ವರ್ಣಂ ನೃತ್ಯತಂಡ ಈಶ್ವರ ಮಂಗಲ ಇದರ ಮುಖ್ಯಸ್ಥರಾದ ಸೌಪರ್ಣಿಕ ಗುರುರಾಜ್ ರವರನ್ನು ಕೊರಗಜ್ಜ ಸೇವಾ ಸಮಿತಿ ವತಿಯಿಂದ ಗೌರವಿಸಲಾಯಿತು
ನೇಮೋತ್ಸವದ ಅದೃಷ್ಟ ಚೀಟಿಯನ್ನು ಸುಳ್ಯಪದವು ಶ್ರೀ ಮಂಜುನಾಥ ರೋಡ್ ಲೈನ್ಸ್ ಮಾಲಕರು ಬಿಡುಗಡೆಗೊಳಿಸಿದರು ನಂತರ ಪ್ರಸಾದ ಭೋಜನ ನಡೆಯಿತು.
ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷರಾದ ಬೆಳಿಯಪ್ಪ ಗೌಡ, ಉಪಾಧ್ಯಕ್ಷರಾದ ಸದಾನಂದ ರೈ ಬೊಳoಕೂಡ್ಲು, ಕಾರ್ಯದರ್ಶಿ ಪ್ರಕಾಶ್ ಮರದ ಮೂಲೆ, ಕೋಶಾಧಿಕಾರಿ ಭಾಸ್ಕರ ಹೆಗ್ಡೆ, ವಿನಯ್ ಕುಮಾರ್ ದೇವಸ್ಯ,ಸದಸ್ಯರು,
ಭಕ್ತರು ಉಪಸ್ಥಿತರಿದ್ದರು.

news-details