ಕೇರಳ ಕರ್ನಾಟಕ ಗಡಿಭಾಗದ ಕುಳದಪಾರೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಸೋಮವಾರ ಮಂಗಳವಾರ ನಡೆಯಿತು.
ಸೋಮವಾರ ರಾತ್ರಿ ಕುಳದ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು,ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ,ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಟ ನಡೆಯಿತು.
ಕುಳದಪಾರೆ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ನಂತರ ನೃತ್ಯ ವೈವಿಧ್ಯ,
ಅಭಿನಯ ಕಲಾತಂಡ ಕಾಸರಗೋಡು ಇವರು ಅಭಿನಯಿಸುವ ಸಾಮಾಜಿಕ ಹಾಸ್ಯಮಯ ತುಳು ನಾಟಕ - ಅಣ್ಣೆ ಬರುವೆನಾ? ನಡೆಯಿತು.ಮಂಗಳವಾರ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸೇವೆ ನಂತರ ಅರಸಿನ ಪ್ರಸಾದ ವಿತರಣೆ ನಡೆಯಿತು.ಕುಳ ತರವಾಡು ಮನೆಯ ಮುಖ್ಯಸ್ಥ ದಾಮೋದರ ಕುಳ, ಸಾವಿರಾರು ಭಕ್ತರು ಉಪಸ್ಥಿತರಿದ್ದರು