ಜಮ್ಮು ಕಾಶ್ಮೀರದ ಪಹಲ್ಗಾಮ್‌ ನಲ್ಲಿ 27 ಹಿಂದುಗಳ ಮರಣ ಹೋಮ-ಸುಳ್ಯ ಪದವು ಸ್ವಯಂ ಪ್ರೇರಿತವಾಗಿ ಸಂಪೂರ್ಣ ಬಂದ್ -ಸುಳ್ಯಪದವು ರಾಷ್ಟ್ರಭಕ್ತರ ಕರೆಗೆ ಸ್ಪಂದಿಸಿದ ಜನತೆ

ಪುತ್ತೂರು

news-details

ಜಮ್ಮು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಹಿಂದು ಪ್ರವಾಸಿಗರನ್ನೇ ಗುರಿಯಾಗಿಸಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 27 ಹಿಂದೂ ಪ್ರವಾಸಿಗರ ಮಾರಣ ಹೋಮವೇ ನಡೆದಿದೆ.
ಈ ಕೃತ್ಯ ವನ್ನು ಖಂಡಿಸಿ ಗುರುವಾರ ಮಧ್ಯಾಹ್ನ 3 ರಿಂದ 4 ರ ತನಕ (ಒಂದು ಗಂಟೆ)ಸಂಪೂರ್ಣವಾಗಿ ಸುಳ್ಯಪದವು ಪೇಟೆಯಲ್ಲಿ ಸ್ವಯಂ ಪ್ರೇರಿತವಾಗಿ ವರ್ತಕರು ಅಂಗಡಿ ಮುಚ್ಚಿದರು. ಆಟೋ ರಿಕ್ಷಾ ಹಾಗೂ ಗೂಡ್ಸ್ ಗಾಡಿಗಳ ಚಾಲಕ ಮಾಲಕರು ಕೂಡ ಕೈಜೋಡಿಸಿದರು. ಸಂಪೂರ್ಣ ವಾಗಿ ಬಂದ್ ಮಾಡಿ ಅಗಲಿದ ಭಾರತಿಯರಿಗೆ ಸಂತಾಪ ಸೂಚಿಸಿದರು.

news-details