<p>ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಡಳಿತ ಮಂಡಳಿಯ ನೂತನ</p>
<p>ಕೊಠಡಿಯ ಉದ್ಘಾಟನೆ, </p>
<p>ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ</p>
<p>ಕಾರ್ಯಕ್ರಮಗಳು, </p>
<p>ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಂದ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು. </p>
<p>1965 ರಲ್ಲಿ ಆರಂಭಗೊಂಡ ಸುಮಾರು ಐವತ್ತೊಂಬತ್ತು ವರ್ಷಗಳಿಂದ</p>
<p>ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ</p>
<p>ವಿವೇಕಾನಂದ ಪದವಿಪೂರ್ವ ಕಾಲೇಜು ಗುರುತಿಸಿಕೊಂಡಿದೆ. ಇಂದು</p>
<p>ವಿವೇಕಾನಂದ ಪದವಿಪೂರ್ವ ಕಾಲೇಜು ರಾಜ್ಯದ ಪ್ರತಿಷ್ಠಿತ ಪದವಿಪೂರ್ವ</p>
<p>ಕಾಲೇಜುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಂತಹ ಶಿಕ್ಷಣ ಸಂಸ್ಥೆಗೆ ಇದೀಗ</p>
<p>ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಆಡಳಿತ ಮಂಡಳಿಯ</p>
<p>ಕೊಠಡಿಯೊಂದು ನಿರ್ಮಾಣಗೊಂಡಿದೆ. ಇದು ಉತ್ತಮ ಆಡಳಿತಾತ್ಮಕ</p>
<p>ವ್ಯವಸ್ಥೆಗೆ ಸಹಕಾರಿಯಾಗಲಿ ಹಾಗೂ ಈ ಮೂಲಕ ವಿದ್ಯಾಥಿರ್ಗಳಿಗೆ ವ್ಯಕ್ತಿ</p>
<p>ನಿರ್ಮಾಣದೊಂದಿಗೆ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದೊಂದಿಗೆ ವಿವೇಕಾನಂದ</p>
<p>ಪದವಿಪೂರ್ವ ಕಾಲೇಜು ಅತ್ಯುತ್ತಮ ಶಿಕ್ಷಣ ನೀಡುವಂತಾಗಲಿ ಎಂದು</p>
<p>ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.</p>
<p>ಕಲ್ಲಡ್ಕ ಪ್ರಭಾಕರ್ ಭಟ್ ಹಾರೈಸಿದರು. </p>
<p>ಪುತ್ತೂರಿನ ನೆಹರು ನಗರದ</p>
<p>ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ</p>
<p>ಮೊತ್ತಮೊದಲ ವಿದ್ಯಾಸಂಸ್ಥೆಯಾದ ವಿವೇಕಾನಂದ ಪದವಿಪೂರ್ವ ಕಾಲೇಜಿನ</p>
<p>ಆಡಳಿತ ಮಂಡಳಿಯ ನೂತನ ಕೊಠಡಿಯನ್ನು ಉದ್ಘಾಟಿಸಿ ಅವರು</p>
<p>ಮಾತನಾಡಿದರು.</p>
<p>ಆಡಳಿತ ಮಂಡಳಿಯ ನೂತನ ಕೊಠಡಿಯ ಉದ್ಘಾಟನೆಯ ಹಿನ್ನೆಲೆಯಲ್ಲಿ</p>
<p>ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಬೆಳಗ್ಗೆ</p>
<p>ಅರುಣ್ ಶಾತಡ್ಕ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು</p>
<p>ನೆರವೇರಿಸಿದರು. ನಂತರ ದೀಪ ಪ್ರಜ್ವಲನೆಯ ಮೂಲಕ ಡಾ. ಕಲ್ಲಡ್ಕ</p>
<p>ಪ್ರಭಾಕರ್ ಭಟ್ ಅವರು ಆಡಳಿತ ಮಂಡಳಿಯ ನೂತನ</p>
<p>ಕೊಠಡಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ</p>
<p>ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್, ಕಾರ್ಯದರ್ಶಿಗಳಾದ</p>
<p>ಡಾ. ಕೆ. ಎಂ ಕೃಷ್ಣ ಭಟ್, ಕೋಶಾಧಿಕಾರಿಗಳಾದ ಅಚ್ಚುತ ನಾಯಕ್,</p>
<p>ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ</p>
<p>ರವೀಂದ್ರ ಪಿ., ಸಂಚಾಲಕರಾದ ಎಂ ಗೋಪಾಲಕೃಷ್ಣ ಭಟ್,</p>
<p>ಕೋಶಾಧಿಕಾರಿಗಳಾದ ಸಚಿನ್ ಶೆಣೈ , ವಿವೇಕಾನಂದ ವಸತಿ ನಿಲಯಗಳ</p>
<p>ಅಧ್ಯಕ್ಷರಾದ ರಮೇಶ್ ಪ್ರಭು, ವಿವೇಕಾನಂದ ಪದವಿಪೂರ್ವ ಕಾಲೇಜಿನ</p>
<p>ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಂಶುಪಾಲರಾದ ಮಹೇಶ್</p>
<p>ನಿಟಿಲಾಪುರ, ಉಪಪ್ರಾಂಶುಪಾಲರಾದ ದೇವಿ ಚರಣ್ ರೈ ಎಂ., ವಿವೇಕಾನಂದ</p>
<p>ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿಗಳಾದ ಭಾಸ್ಕರ್, ವಿವೇಕಾನಂದ</p>
<p> </p>
<p>ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ</p>
<p>ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಘಾಟನೆಯ</p>
<p>ನಂತರ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ</p>
<p>ಪ್ರಭಾಕರ್ ಭಟ್ ಅವರ ಅಧ್ಯಕ್ಷತೆಯಲ್ಲಿ ಪದವಿಪೂರ್ವ ಕಾಲೇಜಿನ ಆಡಳಿತ</p>
<p>ಮಂಡಳಿಯ ಸಭೆ ನಡೆಯಿತು.</p>