ಎಸ್‌ಒಎಸ್ ಕಿರುಚಿತ್ರದಿಂದ ಮಹತ್ವದ ಸಂದೇಶ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್. ಅಭಿಪ್ರಾಯ

ಮಂಗಳೂರು

news-details

<p>ಮಂಗಳೂರು : &nbsp;ಅತ್ಯಾಚಾರ, ಅಪಘಾತದಂತಹ ಘಟನೆ ಸಂಭವಿಸಿದಾಗ ಮೊಬೈಲ್ ಫೋನ್&zwnj;ನಲ್ಲಿರುವ ಫೀಚರ್ ಬಳಸಿ<br />
ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎನ್ನುವ &nbsp;ಮಹತ್ವದ ಸಂದೇಶವನ್ನು ಎಸ್&zwnj;ಒಎಸ್ (ಸೇವ್ ಅವರ್ ಸೋಲ್ ) ಕಿರುಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಅರಿವು ಮೂಡಿಸಲು ಕೂಡಾ ಈ ಕಿರುಚಿತ್ರದಲ್ಲಿ ಪ್ರಯತ್ನಿಸಲಾಗಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್. ಹೇಳಿದರು.<br />
ಮಂಗಳೂರಿನ ಭಾರತ್ ಸಿನಿಮಾಸ್&zwnj;ನಲ್ಲಿ ಬುಧವಾರ ನಡೆದ &lsquo;ಸೇವ್ ಅವರ್ ಸೋಲ್ &lsquo; ಕಿರುಚಿತ್ರದ ಪ್ರೀಮಿಯರ್ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.<br />
ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರೆಟ್&zwnj;ನ ಡಿಸಿಪಿ ಸಿದ್ಧಾರ್ಥ ಗೋಯಲ್, &nbsp;ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ .ಡಿ.ಎಸ್. &nbsp;ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಶುಭ ಹಾರೈಸಿದರು.<br />
ಎ.ಯು. ಕ್ರಿಯೇಶನ್ಸ್ ಮತ್ತು ದ.ಕ.ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಎಸ್&zwnj;ಒಎಸ್ ಕಿರುಚಿತ್ರ ಅ.18ರಂದು ಯು ಟ್ಯೂಬ್&zwnj;ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಯು.ಜಿ.ರಾಧ ತಿಳಿಸಿದರು.<br />
ಚಿತ್ರದ ನಿರ್ದೇಶಕ ಅಚಲ್ ಉಬರಡ್ಕ , ಸಹ ನಿರ್ದೇಶಕರಾದ ಗುರುಮೂರ್ತಿ ಅಮ್ಮಣ್ಣಾಯ , ರತ್ನ ಸಿಂಚನ, ಸಂಗೀತ ನಿರ್ದೇಶಕ ಸಾತ್ವಿಕ್ ಪಡಿಯಾರ್ , ಛಾಯಾಗ್ರಾಹಕ ಷಣ್ಮುಖ ಪ್ರಸಾದ್, &nbsp;ತಾಂತ್ರಿಕ ಸಲಹೆಗಾರ ಅನೀಶ್ ಗಾಣಿಗ , ಪ್ರಸಾದ ಕೊಲ ಉಪಸ್ಥಿತರಿದ್ದರು. ರಚನ ಗುಡಿಗಾರ್ ಕಾರ್ಯಕ್ರಮ ನಿರೂಪಿಸಿದರು.</p>

<p>ಫೋಟೋ : ಎಸ್&zwnj;ಒಎಸ್ 1,2</p>

news-details