ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಪ್ರಥಮ ಬಿ ಸಿ ಎ ವಿದ್ಯಾರ್ಥಿನಿ ಯಾಗಿರುವ ತೃಷಾ ಕುಮಾರಿ ಇವರು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ರವರು ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ನಡೆಸಿದ ಎನ್ ಡಿ ಎ (ರಾಷ್ಟ್ರೀಯ ರಕ್ಷಣಾ ಅಕಾಡೆಮಿ) ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಇವರು 34 ಅಲಹಾಬಾದ್ ಎಸ್ ಎಸ್ ಬಿ ಗೆ ಆಯ್ಕೆ ಯಾಗಿರುತ್ತಾರೆ ಇವರು ಶ್ರೀ ಅಶೋಕ್ ಕುಮಾರ್ ಕುಂಬ್ರ ಬಡಕ್ಕೋಡಿ ಮತ್ತು ಅರಿಯಡ್ಕ ಗ್ರಾ. ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಸವಿತಾ. ಎಸ್ ಇವರ ಪುತ್ರಿ.ಇವರು ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿ.