ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಎರಡನೇಆವೃತ್ತಿ ಸಂಪನ್ನ

ಮಂಗಳೂರು

news-details

<p>&nbsp;&nbsp; &nbsp;ಮAಗಳಾದೇವಿ ದೇವಸ್ಥಾನದ ಪರಿಸರಸರದಲ್ಲಿಗಾಂಧಿಜಯAತಿ ಪ್ರಯುಕ್ತ ಶ್ರಮದಾನ ಸಂಪನ್ನ<br />
&nbsp;&nbsp; &nbsp;ಉಚಿತ ಹಣ್ಣಿನ ಸಸಿಗಳ ವಿತರಣಾಕಾರ್ಯಕ್ರಮ<br />
&nbsp;&nbsp; &nbsp;ಎರಡನೇ ಹಂತದಲ್ಲಿ ಹತ್ತು ಹಲವು ಸಮಾಜಮುಖೀ ಕಾರ್ಯಗಳು&nbsp;<br />
&nbsp;&nbsp; &nbsp;ನಗರದ ಸುಂದರೀಕರಣಕ್ಕೆಆದ್ಯತೆ</p>

<p>ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಎರಡನೇಆವೃತ್ತಿಯಲ್ಲಿಗಾಂಧಿಜಯAತಿ ಪ್ರಯುಕ್ತ ಸ್ವಚ್ಛತಾಅಭಿಯಾನವನ್ನು, ದಿನಾಂಕ ೦೨-೧೦-೨೦೨೪ ಭಾನುವಾರ ಬೆಳಗ್ಗೆ ೭.೩೦ಕ್ಕೆ ಮಂಗಳಾದೇವಿ ದೇವಸ್ಥಾನದ ಪರಿಸರ&Agrave;ದಲ್ಲಿ ಹಮ್ಮಿಕೊಳ್ಳಲಾಯಿತು.&nbsp;</p>

<p>ಮಂಗಳೂರು ರಾಮಕೃಷ್ಣ ಮಠದಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿಅವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದಅರುಣ್ ಐತಾಳ್, ಮಂಗಳಾ ಸಮೂಹ ಸಂಸ್ಥೆಗಳ ಪ್ರಾಂಶುಪಾಲರಾದ ಪ್ರತಿಜ್ಞಾ ಸುಹಾಸಿನಿ, ಪರಿಸರ ಪ್ರೇಮಿಅರ್ಜುನ್ ಮಸ್ಕರೇನಸ್ ಹಾಗೂ ಮಂಗಳಾದೇವಿ ಸೇವಾಸಮಿತಿಯಖಜಾಂಜಿ ವಿಶ್ವನಾಥ್; ಮಂಗಳಾದೇವಿ ದೇವಸ್ಥಾನದ ಮುಂಭಾಗ ಹಸಿರು ನಿಶಾನೆ ತೋರುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರಗಣ್ಯರು ಸಾಂಕೇತಿಕವಾಗಿ ಸ್ವಚ್ಛತಾಕಾರ್ಯದಲ್ಲಿತೊಡಗಿದರು. ಈ ಸಂದರ್ಭದಲ್ಲಿಕ್ಯಾಪ್ಟನ್&zwnj;ಗಣೇಶ್&zwnj;ಕಾರ್ಣಿಕ್, ಮಂಗಳಾದೇವಿ ಸೇವಾಸಮಿತಿಯಅಧ್ಯಕ್ಷರಾದ ದಿಲ್ ರಾಜ್ ಆಳ್ವ, ಕಾರ್ಯದರ್ಶಿಗಳಾದ ತಿಲಕ್&zwnj;ರಾಜ್, ಕಮಲಾಕ್ಷ ಪೈ, ಸತ್ಯನಾರಾಯಣ ಕೆ. ವಿ., ಉಮಾನಾಥ್&zwnj;ಕೋಟೆಕ್ಕಾರ್ ಮತ್ತುರಂಜನ್ ಬೆಳ್ಳರ್ಪ್ಪಾಡಿ ಉಪಸ್ಥಿತರಿದ್ದರು.&nbsp;</p>

<p>ಈ ಸಂದರ್ಭದಲ್ಲಿ ಮಾತನಾಡಿದಅರುಣ್ ಐತಾಳ್, &quot;ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳಾದೇವಿ ದೇವಸ್ಥಾನದರಥಬೀದಿಯ ಸ್ವಚ್ಛತಾಕಾರ್ಯವನ್ನುಕೈಗೊಂಡಿರುವುದು ನಿಜಕ್ಕೂ ಸಂತಸತAದಿದೆ. ಯುವಕರನ್ನುಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಸ್ವಚ್ಛತೆಯಕುರಿತಾದಜಾಗೃತಿ ಮೂಡುತ್ತದೆ. ಮುಂದೆಅವರು ಈ ದೇಶದಜವಾಬ್ದಾರಿಯುತ ಪ್ರಜೆಗಳಾಗಿ ನಿರ್ಮಾಣ ಮಾಡುವಲ್ಲಿ ಈ ಕಾರ್ಯ ಸಹಕಾರಿಯಾಗುತ್ತದೆ. ಮುಂದೆ ಈ ಯುವಕರು ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯಕಾರ್ಯದಲ್ಲಿ ಭಾಗಿಗಳಾಗಲಿ. ರಾಮಕೃಷ್ಣ ಮಿಷನ್ ನ ಈ ಕಾರ್ಯಇನ್ನಷ್ಟುಉತ್ತಮವಾಗಿ ಮುಂದುವರೆಯಲಿ&quot; ಎಂದು ಹೇಳಿ ಶುಭ ಹಾರೈಸಿದರು. &nbsp;</p>

<p>ಮಂಗಳಾ ಸಮೂಹ ಸಂಸ್ಥೆಗಳ ಪ್ರಾಂಶುಪಾಲರಾದ ಪ್ರತಿಜ್ಞಾ ಸುಹಾಸಿನಿ ಅವರು ಮಾತನಾಡಿ &quot;ಇಂತಹಅದ್ಭುತಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಗೆ ಭಾಗಿಗಳಾಗಲು ಅವಕಾಶ ಕೊಟ್ಟರಾಮಕೃಷ್ಣ ಮಠದ ಸ್ವಾಮೀಜಿಗಳಿಗೆ ಹಾಗೂ ರಾಮಕೃಷ್ಣ ಮಿಷನ್ ನ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದೆಯೂ ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಸಹಕಾರ ಎಂದಿಗೂ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ಭಾಗಿಯಾಗಿರುವುದು ನಿಜಕ್ಕೂ ಶ್ಲಾಘನೀಯ. ಈ ಕಾರ್ಯವನ್ನು ವಿದ್ಯಾರ್ಥಿಗಳು ಮುಂದುವರಿಸಬೇಕು &quot; ಎಂದು ಹೇಳಿದರು.&nbsp;</p>

<p>ಸ್ವಯಂಸೇವಕರಾದದಾಮೋದರ್ ನಾಯಕ್, ಅವಿನಾಶ್&zwnj;ಅಂಚನ್, ಅಚಲ್, ವಿಜೇಶ್&zwnj;ದೇವಾಡಿಗ, ಬಾಲಕೃಷ್ಣ ಭಟ್, ಸಚಿನ್ ಶೆಟ್ಟಿ ನಲ್ಲೂರು, ಸಜಿತ್ ಕೆ ನೇತೃತ್ವದಲ್ಲಿ ಮಂಗಳಾ ಕಾಲೇಜ್&zwnj;ಒಫ್ ನರ್ಸಿಂಗ್ ಆಂಡ್&zwnj;ಅಲೈಡ್ ಹೆಲ್ತ್ ಸೈನ್ಸಸ್ ನ ರಾಷ್ಟೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಮಿಥುನ್ ವೇಣುಗೋಪಾಲ್, ಪ್ರಾಧ್ಯಾಪಕರಾದ ನವೀನ್ ಮಾರ್ಗದರ್ಶನದಲ್ಲಿ&Agrave; ವಿದ್ಯಾರ್ಥಿಗಳ ತಂಡ ಮಂಗಳಾದೇವಿ ರಥಬೀದಿಯರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು ಮುಂತಾದ ತ್ಯಾಜ್ಯಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು. ಮಂಗಳಾದೇವಿ ಸೇವಾಸಮಿತಿಯ ಸದಸ್ಯರು, ಅಂಬಾ ಮಹೇಶ್ವರಿ ಸೇವಾಸಮಿತಿಯ ಸದಸ್ಯರು ಹಾಗೂ ರಾಮಕೃಷ್ಣ ಮಿಷನ್ ನ ನಿವೇದಿತಾ ಬಳಗದ ಸದಸ್ಯರು ಈ ಕಾರ್ಯದಲ್ಲಿ ಕೈ ಜೋಡಿಸಿದರು.&nbsp;</p>

<p>ಸ್ವಯಂಸೇವಕರಾದಅಭಿಷೇಕ್ ವಿ ಸುಧಾಕರ್, ಉದಯ್ ಕೆ. ಪಿ., ತಾರಾನಾಥ್ ಆಳ್ವ, ಸುನಂದಾ ಶಿವರಾಮ್, ಶಿವರಾಮ್ ನೇತೃತ್ವದಲ್ಲಿ ಎ. ಜೆ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಂಗಳಾದೇವಿಯಿAದ ಪಾಂಡೇಶ್ವರಕಡೆಗೆ ತೆರಳುವ ರಸ್ತೆಯನ್ನು ಪೌರಕಾರ್ಮಿಕರಜೊತೆಗೂಡಿ ಸ್ವಚ್ಛಗೊಳಿಸಿದರು.&nbsp;</p>

<p>ಫಲ ವೃಕ್ಷಾರೋಪಣಅಭಿಯಾನ- ಉಚಿತ ಹಣ್ಣಿನ ಸಸಿಗಳ ವಿತರಣಾಕಾರ್ಯಕ್ರಮ<br />
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಹಾಗೂ ಸೇಂಟ್ ಅಲೋಶಿಯಸ್ ಸಂಸ್ಥೆಗಳ ಸಹಯೋಗದೊಂದಿಗೆಉಚಿತ ಹಣ್ಣಿನ ಸಸಿಗಳ ವಿತರಣಾಕಾರ್ಯಕ್ರಮಆಶ್ರಮದಆವರಣದಲ್ಲಿ ನಡೆಯಿತು. ಮಂಗಳೂರು ರಾಮಕೃಷ್ಣ ಮಠದಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿ, ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದಅರುಣ್ ಐತಾಳ್, ನಿವೃತ್ತಯೋಧರಾದಕ್ಯಾಪ್ಟನ್&zwnj;ಗಣೇಶ್&zwnj;ಕಾರ್ಣಿಕ್ ಹಾಗೂ ಮಂಗಳೂರಿನ ಪರಿಸರ ಪ್ರೇಮಿಅರ್ಜುನ್ ಮಸ್ಕರೇನಸ್ ಹಣ್ಣಿನ ಸಸಿಗಳ ವಿತರಣಾಕಾರ್ಯಕ್ಕೆ ಚಾಲನೆ ನೀಡಿದರು. ಫಲ ವೃಕ್ಷಾರೋಪಣಅಭಿಯಾನವು,ಪಕ್ಷಿಗಳಿಗೆ ಮತ್ತು ಪ್ರಾಣಿಗಳಿಗೆ ಆಹಾರಒದಗಿಸುವುದರೊಂದಿಗೆ, ನಾಗರಿಕರನ್ನು ಪ್ರೇರೇಪಿಸಿ ಮಂಗಳೂರು ನಗರವನ್ನು &#39;ಹಣ್ಣುಗಳ ನಗರ&#39;ವನ್ನಾಗಿಸುವಯೋಜನೆಯಾಗಿದೆ. &nbsp;&nbsp;</p>

<p><br />
ಹನ್ನೆರಡು ತಿಂಗಳ ನಿರಂತರ ಸ್ವಚ್ಛತಾಯಜ್ಞ</p>

<p>೨೦೨೩ ರಒಕ್ಟೋಬರ್ ೨ ರಂದು ಸ್ವಚ್ಛಾಂಜಲಿ ಎಂಬ ಕಾರ್ಯಕ್ರಮದೊಂದಿಗೆ ಮಂಗಳೂರು ರಾಮಕೃಷ್ಣ ಮಠದಆವರಣದಲ್ಲಿಆರಂಭಗೊAಡಎರಡನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನವು ನಿರಂತರವಾಗಿ ಹನ್ನೆರಡು ತಿಂಗಳುಗಳ ಕಾಲ ಒಂದುಜನಾAದೋಲನವಾಗಿ ನಡೆಯಿತು. ಮೊದಲ ಅಭಿಯಾನವು ಮಂಗಳೂರಿನ ಹಂಪನಕಟ್ಟೆಯಕ್ಲಾಕ್&zwnj;ಟವರ್ ಬಳಿ ಆರಂಭಗೊAಡು, ನಂತರದಲ್ಲಿಕ್ರಮವಾಗಿ ಪಂಪವೆಲ್ ನ ಮಹಾವೀರ ವೃತ್ತ, ಮಂಗಳಾದೇವಿ ದೇವಸ್ಥಾನ, ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣ, ಪಾಂಡೇಶ್ವರದರೊಸಾರಿಯೋಚರ್ಚ್ರಸ್ತೆ, ಕೊಟ್ಟಾರದದಕ್ಷಿಣಕನ್ನಡಜಿಲ್ಲಾ ಪಂಚಾಯತ್ ಬಳಿಯ ಮಿಯಾವಾಕಿಆವರಣ, ಎಕ್ಕೂರು ಬಸ್ ನಿಲ್ದಾಣದ ಪರಿಸರ, ಕೊಟ್ಟಾರ ಚೌಕಿ, ಕೂಳೂರಿನ ಹಿಂದೂರುದ್ರಭೂಮಿ, ವಾಮಂಜೂರಿನ ಪಚ್ಚನಾಡಿ ಹಾಗೂ ತಣ್ಣೀರುಬಾವಿಯಕಡಲ ಕಿನಾರೆಯಲ್ಲಿ ನಿರಂತರವಾಗಿ ಪ್ರತಿ ತಿಂಗಳ ಎರಡನೇ ಭಾನುವಾರ ಸ್ವಚ್ಛತಾಅಭಿಯಾನವು ನಡೆಯಿತು.&nbsp;</p>

<p>ನಗರದ ಸುಂದರೀಕರಣಕ್ಕೆಆದ್ಯತೆ<br />
&lsquo;ಒನ್-ಅಪ್&zwnj;ಕುಡ್ಲ&rsquo;, ನಮ್ಮೆಲರಕುಡ್ಲಎಂಬ ಶೀರ್ಷಿಕೆಯೊಂದಿಗೆ ಮಂಗಳೂರು ನಗರದಾದ್ಯಂತ ವಿವಿಧ ಸಾರ್ವಜನಿಕ ಸ್ಥಳಗಳ ಸುಂದರರೀಕರಣಕ್ಕೆ ಈ ಹಂತದಲ್ಲಿಒತ್ತು ನೀಡಲಾಗಿತ್ತು. ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದ ಬಳಿಯಲ್ಲಿ ಮಲಮೂತ್ರ ವಿಸರ್ಜನೆ ಮುಂತಾದವುಗಳಿದ ಮಲಿನಗೊಂಡಿದ್ದಆವರಣಗೋಡೆಯನ್ನು ಸ್ವಚ್ಛಗೊಳಿಸಿಸುಂದರ ವರ್ಲಿ ಚಿತ್ರಗಳನ್ನು ಬಿಡಿಸಲಾಯಿತು. ಕೊಟ್ಟಾರಚೌಕಿಯ ಪಿಲ್ಲರ್ ಗಳಲ್ಲಿ ಮಾಸಿ ಹೋಗಿದ್ದ ವರ್ಣಚಿತ್ರಗಳ ಮರು ಪೇಂಟಿAಗ್&zwnj;ಕಾರ್ಯ ಈ ಅಭಿಯಾನದಲ್ಲಿ ನಡೆಸಲಾಯಿತು. ಎಕ್ಕೂರು ಹಾಗೂ ಪಂಜಿಮೊಗರು ಪ್ರದೇಶಗಳಲ್ಲಿ ಶಿಥಿಲಗೊಂಡಿದ್ದ ಬಸ್ ತಂಗುದಾಣಗಳನ್ನು ನವೀಕರಣಗೊಳಿಸಿ ಜನರಿಗೆ ಅನುಕೂಲವಾಗುವಂತೆಒದಗಿಸುವಕಾರ್ಯ ಈ ಹಂತದಲ್ಲಿನಡೆಯಿತು.&nbsp;</p>

<p>ಸ್ವಚ್ಛತಾಜನಸಂಪರ್ಕಅಭಿಯಾನ<br />
ಮAಗಳೂರಿನ ಸಾರ್ವಜನಿಕರಲ್ಲಿ ಸ್ವಚ್ಛತೆಯಕುರಿತುಜಾಗೃತಿ ಮೂಡಿಸುವಉದ್ದೇಶದಿಂದ ಸ್ವಚ್ಛತಾಜನಸಂಪರ್ಕಅಭಿಯಾನವನ್ನು ಈ ಹಂತದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾಜನಸಂಪರ್ಕಅಭಿಯಾನದ ಮೂಲಕ ಸುಮಾರು ೫೦೦೦ ಮನೆಗಳು ಒಳಗೊಂಡAತೆ ರಿಕ್ಷಾ, ಬಸ್ ನಿಲ್ದಾಣ, ಅಂಗಡಿಮುAಗಟ್ಟುಗಳು ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಮೂಡಿಸುವಕಾರ್ಯಇದರಲ್ಲಿ ನಡೆದಿದೆ.&nbsp;</p>

<p>ಸಂಘ ಸಂಸ್ಥೆಗಳ ಸಾಥ್<br />
ಅಭಿಯಾನದುದ್ದಕ್ಕೂ ಮಂಗಳೂರು ಮಹಾನಗರ ಪಾಲಿಕೆ, ಮಂಗಳಾದೇವಿ ಸೇವಾಸಮಿತಿ, ರೊಸಾರಿಯೋಚರ್ಚ್ ಸಮಿತಿ, ಅಂಚೆ ಇಲಾಖೆ ಸಿಬ್ಬಂದಿಗಳು, ವಿದ್ಯಾನಗರ ಶಾರದಾ ಸೇವಾ ಟ್ರಸ್ಟ್, ಹಿಂದುಯುವಸೇನೆ ವಿದ್ಯಾನಗರ ಶಾಖೆ,ಕೂಳೂರುಹಿಂದುರುದ್ರಭೂಮಿ ಸಮಿತಿ,ಮಂಗಳೂರು ವಿಶ್ವವಿದ್ಯಾನಿಲಯ ಕ್ರಿಶ್ಚಿಯನ್ ಪೀಠ&Agrave;, ಮಂಗಳಜ್ಯೋತಿ ಸಂಯುಕ್ತ ಶಾಲೆ, ಜೆಪ್ಪು ಸಂತಜೋಸೆಫ್ ಸೆಮಿನಾರಿ, ಶ್ರೀರಾಮ್ ಟ್ರಾನ್ಸ್ಪೋರ್ಟ್ಸ್, ಶ್ರೀನಿವಾಸ ಫೈನಾನ್ಸ್, ಕೆನೆರಾ ಬ್ಯಾಂಕ್ ಮಂಗಳೂರು ವೃತ್ತಕಚೇರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ, ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರೈ. ಲಿ.,ಸರ್ವಶಕ್ತಿ ಮಹಿಳಾ ಮಂಡಳಿ, ಸರ್ವಶಕ್ತಿ ಬಾಲ ಭಜನಾ ಕಲಿಕಾ ತಂಡ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ದ. ಕ. ಖಾಸಗಿ ಬಸ್ ಮಾಲಕರ ಸಂಘ,ವನ ಚಾರಿಟೇಬಲ್ ಟ್ರಸ್ಟ್, ನಿವೇದಿತಾ ಬಳಗ, ಆದಿತತ್ವಆರ್ಟ್ಸ್, ಅಂಬಾಮಹೇಶ್ವರಿ ಸೇವಾಸಮಿತಿ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳು ಕೈಜೋಡಿಸಿದವು.ನಿಟ್ಟೆ ಫಿಸಿಯೋಥೆರಪಿಕಾಲೇಜು, ಮಂಗಳಾ ಸಮೂಹ ಸಂಸ್ಥೆಗಳು, ಎಸ್.ಡಿ.ಎಂ.ಸಮೂಹ ಸಂಸ್ಥೆಗಳು, ಎಜೆ ಸಮೂಹ ಸಂಸ್ಥೆಗಳು, ಶ್ರೀನಿವಾಸ ಸಮೂಹ ಸಂಸ್ಥೆಗಳು, ಕೆನರಾಕಾಲೇಜು, ಮ್ಯಾಪ್ಸ್ಕಾಲೇಜು, ಮುಂತಾದ ವಿದ್ಯಾಸಂಸ್ಥೆಗಳು ಸ್ವಯಂ ಭಾಗಿಯಾದರು. ಈ ಅಭಿಯಾನಕ್ಕೆ ಮಂಗಳೂರಿನ ಪ್ರತಿಷ್ಠಿತಎಂ.ಆರ್.ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿದೆ.</p>

news-details