ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೊಸಿಯೆಷನ್ ಮಂಗಳೂರು ವಲಯದ ವತಿಯಿಂದ ಗಾಂಧಿ ಜಯಂತಿ ಆಚರಣೆ

ಮಂಗಳೂರು

news-details

<p>02 ಅಕ್ಟೊಬರ್ ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ ಹಿನ್ನಲೆಯಲ್ಲಿ &nbsp;ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೊಸಿಯೆಷನ್ ಮಂಗಳೂರು ವಲಯದ ವತಿಯಿಂದ ಮಂಗಳೂರಿನ ಮಣ್ಣಗುಡ್ಡೆಯ &nbsp;ಗಾಂಧಿ ಪಾರ್ಕ್ ನಲ್ಲಿ ಬಾಪೂಜಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.&nbsp;<br />
ಮೊದಲಿಗೆ ಬಾಪೂಜಿಯವರ ಪ್ರತಿಮೆಗೆ &nbsp;ಅತಿಥಿಗಳು ಮಾಲಾರ್ಪಣೆಗೈದು ಗೌರವ ಸಲ್ಲಿಸಿದರು. ಸ್ವಚ್ಛತಾ ಆಂದೋಲನದ ಅಂಗವಾಗಿ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ಕಳೆದ 25 ವರುಷಗಳಿಂದ ಸ್ವಚ್ಛತಾ ಕಾರ್ಯವನ್ನು ನೆರವೇರಿಸುತ್ತಿರುವ ಶ್ರೀಮತಿ ಕುಸುಮ ಇವರನ್ನು ಗೌರವದಿಂದ ಅಭಿನಂದಿಸಿ ಸನ್ಮಾನಿಸಲಾಯಿತು.<br />
ಎಸ್.ಕೆ.ಪಿ. ಎ ಮಂಗಳೂರು ವಲಯ ಅಧ್ಯಕ್ಷ ಹರೀಶ್ ಅಡ್ಯಾರ್, &nbsp;ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು. ಹಾಗೂ ಗಾಂಧಿ ಜಯಂತಿಯ ಶುಭಾಶಯವನ್ನು ತಿಳಿಸಿದರು.&nbsp;<br />
ಎಸ್.ಕೆ.ಪಿ.ಎ ಜಿಲ್ಲಾ ಮಾಜಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ, ಜಿಲ್ಲಾ ಮಾಜಿ ಸಂಚಾಲಕರಾದ ನವೀನ್ ಕುದ್ರೋಳಿ, ವಿಠ್ಠಲ್ ಚೌಟ, ಮಂಗಳೂರು ವಲಯ ಗೌರವಾಧ್ಯಕ್ಷ ಪದ್ಮನಾಭ್ ಸುವರ್ಣ, ಉಪಾಧ್ಯಕ್ಷರು ಶ್ರೀ ಪ್ರಭಾಕರ್ ಕುಲಾಲ್,ವಲಯದ ಪ್ರದಾನ ಕಾರ್ಯದರ್ಶಿ ಅಜಯ್ ಕುಮಾರ್, ಕೋಶಾಧಿಕಾರಿ ಅರ್ಜುನ್ ಶೃಂಗೇರಿ ಮೊದಲಾದವರು ಕಾರ್ಯಕ್ರಮದಲ್ಲಿ&nbsp;ಭಾಗವಹಿಸಿದ್ದರು.</p>

news-details